Followers

Friday 24 August 2012

'ಅಮ್ಮಾ.. ನಂಗೆ ಬೆಣ್ಣೆ ಕೊಡು’

                                                 'ಅಮ್ಮಾ.. ನಂಗೆ ಬೆಣ್ಣೆ ಕೊಡು’

ಓಡುತ್ತ –ಓಡುತ್ತಾ ಶ್ರೀ ಕೃಷ್ಣ ಬರ್ತಾನೆ
ಅಮ್ಮಾ ನಂಗೆ ಬೆಣ್ಣೆ ಕೊಡು ಅಂತಾನೆ .
ದೇವಕಿ ಮಾತೆಯ ಮುದ್ದು ಗೋಪಾಲ
ಯಶೋಧಾ ದೇವಿಯ ಮುರಳಿ ಲೋಲ
ಗೊಲ್ಲರಿಗೆ ಬೆಣ್ಣೆ ತಿನ್ನಲು ಕೊಡ್ತಾನೆ
ಅಮ್ಮಾ ನಂಗೆ ಬೆಣ್ಣೆ ಬೇಕು ಅಂತಾನೆ .

ಕಳ್ಳನ ಹಾಗೆ ನುಗ್ಗಿ ತಿನ್ನುತ್ತಾನೆ
ಸುಳ್ಳು ಹೇಳಿ ತಪ್ಪಿಸಿ ಕೊಳ್ತಾನೆ
ಇಂತಹ ದೇವರ ದೇವ ಜಗವನ್ನೇ ಕಾಯುತ್ತಾನೆ
ಭಕ್ತರಿಗೆ ಬೆಣ್ಣೆ ಕೊಡು ಅಂತಾನೆ.

ನಂದನ ಮನೆಯ ಸುಂದರ ತರುಣಿಯರು
ನೀರು ತರಲು ಯಮುನೆಗೆ ಹೋಗುವರು,
ದಾರಿಯಲ್ಲಿ ದೇವಕಿ ನಂದ ಅಡ್ಡ ಬರುತ್ತಾನೆ
ಗೋಪಿಯರಿಗೆ ಬೆಣ್ಣೆ ಕೊಡು ಅಂತಾನೆ.

ಚಂದಾ / ಸವಿತಾ ಇನಾಮದಾರ್.

No comments:

Post a Comment