Followers

Friday 31 May 2013

ಬಿಳಿಯುಡಿಗೆಯ ಒಡತಿ…




ವ್ಹಾರೆ  ಬಿಳಿಯುಡಿಗೆಯ ಒಡತಿ
ಎಷ್ಟು ಬೇಗ ನೀನಾದೆ ನನ್ನಿನಿಯನ ಗೆಳತಿ ??
ಆತನ ಮನದಲ್ಲೂ ನೀನೇ
ಆತನ ಬಾಯಲ್ಲೂ ನೀನೇ !!

ನೀ ಬರುವಾಗ ಹರಡುವೆ ಆ ನಿನ್ನ ಪರಿಮಳ
ಯಾರ ಮುಂದೆ ಹೇಳಲಿ ಎನ್ನ ಮನದ ತಳಮಳ ??
ಬೆಳ್ಳಿಯ ಅರಮನೆಯಲ್ಲಿ ನೀ ವಾಸ ಮಾಡುವೆ,
ಆದರೂ ನೀ ಯಾಕೆ ನಿರಾಭರಣ ಕಾಣುವೆ???

ಮೀಯುತ್ತಿದ್ದ ಇನಿಯ ನನ್ನ ಮುಗ್ಧ ನಗೆಯ ಹೊಳೆಯಲ್ಲಿ
ಮುಳುಗಿ ಹೋಗಿರುವನೀಗ ನಿನ್ನ ಬಿಳಿಯ ಹೊಗೆಯಲ್ಲಿ.
ಸುಖ –ದುಃಖದಲ್ಲಿ ಮೊದಲು ಭಾಗಿಯಾಗುತ್ತಿದ್ದೆ ನಾನು
ನನಕೂ ಮುಂಚೆ ಇರುವೆಯೀಗ ಅವನ ಬಳಿಯಲ್ಲಿ ನೀನು .

ಕೆಲವೇ ದಿನಗಳವರೆಗೆ ನಡೆಯುವುದು ನಿಮ್ಮೀ ಚೆಲ್ಲಾಟ
ಡಾಕ್ಟರನ್ನು ಕಾಣ ಬೇಕಾದಾಗ ಆಗುವುದು ನೋಡು ಪರದಾಟ.
ಎಷ್ಟೆಷ್ಟೋ ವಿಧಗಳಿಂದ ಬಿನ್ನಹಿಸಿದ್ದೆ ನಿನ್ನ ಬಿಡಿರೆಂದು
ಪಶ್ಚಾತ್ತಾಪ ಪಡಹತ್ತಿಹರೀಗ ನಾನೇಕೆ ಆದೆ ಹೀಗಿದರ ದಾಸನೆಂದು????

ಚಂದಾ / ಸವಿತಾ ಇನಾಮದಾರ್.

Friday 24 May 2013

ವಿಪರ್ಯಾಸ


ಖಾಲಿಯಾದ ಬಿಸಿಲೇರಿ ಬಾಟಲಿಯ ನೋಡುತ್ತಾ
ಬೆವರಿನಿಂದ ಒದ್ದೆಯಾದ ಕರವಸ್ತ್ರವ ಹಿಂಡುತ್ತಾ
ರೊಚ್ಚಿಗೆದ್ದ ಸೂರ್ಯನ ತಾಪವನ್ನು ಸಹಿಸುತ್ತಾ 

ಹುಡುಕುತ್ತಾ ಹೊರಟಿರುವೆ  ಒಂದು ಹನಿ ನೀರಿಗಾಗಿ.

ಚಂದಾ / ಸವಿತಾ ಇನಾಮದಾರ್.

Friday 3 May 2013

ಎಚ್ಚರ ಮತದಾರ ಎಚ್ಚರ.




 ಎಚ್ಚರನಾಗು  ಮತವನ್ನು ನೀಡುವ ಓ ದಾನಿಯೇ
ಈ ಬಾರಿಯಾದರೂ ನೀ ಎಚ್ಚರನಾಗು.
ಅವರಿವರ ಜೋರು ದನಿಯನ್ನು ಕೇಳಿ ಬೆಚ್ಚಿ  ಬೀಳದಿರು
ನಿನ್ನ ಒಳಿತನ್ನು ಬಯಸುವ ದನಿಯನ್ನು ಗುರುತಿಸಲು
ಈಗಲಾದರೂ ಎಚ್ಚರನಾಗು.
ಇಲ್ಲದಿರೆ ನಿನಗೇ ಹುಚ್ಚು ಹಿಡಿಸಿಯಾರು
ಇವತ್ತೊಬ್ಬರು ನಾಳೆ ಮತ್ತಿನ್ನೊಬ್ಬರು.

ಚಂದಾ / ಸವಿತಾ ಇನಾಮದಾರ್.

Thursday 2 May 2013

ಅಪಘಾತ



ಆಘಾತ ಪಡದಿರು ನೀನು
ಮೊದಲ ಬಾರಿ ನೋಡುತ್ತಿರುವಿಯೇನು??

ಇದುವೇ ರಾಜಧಾನಿ ದೆಹಲಿ
ಜನ ಸಾಯುವರು ಅಲ್ಲಿ- ಇಲ್ಲಿ.

 ಸಾಗರದ ತೆರೆಯಂತೆ ನೋಡಿದೆಡೆ ಜನಸಂಖ್ಯೆ
ಸಾಲದಾಗಿದೆಯಲ್ಲಾ ಇದ್ದ ಸೌಕರ್ಯ ಜೋಕೆ !!

ಸವಡಿಲ್ಲದವರ ಹಾಗೆ ಓಡುವರು ನೋಡಿಲ್ಲಿ
ಕೊಚ್ಚಿಕೊಂಡು ಹೋಗುತಿಹರು ‘ ಅಪಘಾರದ ಸೆಳವಿನಲ್ಲಿ. 

ಯಮದೂತರಂತೆ ಬರುತ್ತಿಹವು ವಾಹನ
ಸೊಳ್ಳೆಯ ಹಾಗೆ ಹೊಸಕುವವ ಮುಗ್ಧ ಜನರ ಜೀವನ.

ಅತೀ ವೇಗದಿ  ನಡೆಸದಿರು ನೀ ವಾಹನ ಚಾಲಕ
ನೀನೇ ನಿನ್ನ ಅಮೂಲ್ಯ  ಜೀವನದ ಮಾಲೀಕ. 

ನಿನ್ನ ತಪ್ಪಿಲ್ಲದಿದ್ದರೂ ಅದಕ್ಕೆನ್ನುವರು ‘ಅಪಘಾತ’
ನೀ ಹುಶಾರಾಗಿರದಿದ್ದರೆ ಆಗುವುದು ಬಲು ದೊಡ್ಡ ಅನಾಹುತ. 

ಚಂದಾ / ಸವಿತಾ ಇನಾಮದಾರ್.