Followers

Thursday 11 April 2013

ಉಗಾದಿ



ಉಗಾದಿ
ಅನಾದಿ ಕಾಲದಿಂ ಬರುತಿಹುದು ಉಗಾದಿ
ಇದುವೇ  ನಮ್ಮ ಹೊಸ ವರ್ಷದ ಹೊಸತನದ ಬುನಾದಿ..
ಜೀವನದಲ್ಲಿ ಹೊಸ ಹಸಿರು ಚಿಗುರುವುದು,
ಬೇವು ಬೆಲ್ಲದೊಡನೆ  ಮಿಲನವಾಗುವುದು.

ವಿಜಯನಾಮ ಸಂವತ್ಸರದಲಿ
ಜಯದ  ಘೋಷ ಮೊಳಗಲಿ
ಅನುದಿನವೂ ನವೋಲ್ಲಾಸ  ಸಿಗಲಿ…  
ಎಲ್ಲೆಡೆಗೂ ಹರುಷದ ಹೊನಲು ಹರಿಯಲಿ..

3 comments:

  1. ಸಕಾರಾತ್ಮಕತೆ ತುಂಬಿರುವ ಕಾವ್ಯವೂ ಓದುಗನನ್ನು ಬೆಳಕಿನೆಡೆಗೆ ನಡೆಸುತ್ತದೆ. ಈ ನಿಮ್ಮ ಉಗಾದಿ ಕವಿತೆಯಲ್ಲಿ ಅಕ್ಷರ ಅಕ್ಷರಗಳಲ್ಲೂ ಹುರುಪು ತುಂಬುವ ಚೈತನ್ಯವು ಗೋಚರವಾಗುತಿದೆ. ಒಳ್ಳೆಯ ಕವನ.

    ಯಾವುದೇ ಕಾರಣಕ್ಕೂ ಬ್ಲಾಗ್ ನಿಲ್ಲಿಸಿ, ಅಭಿಮಾನಿಗಳನ್ನು ನೋಯಿಸಬೇಡಿರಿ...

    ReplyDelete
  2. This comment has been removed by the author.

    ReplyDelete
  3. ಹೃತ್ಪೂರ್ವಕ ಧನ್ಯವಾದಗಳು ತಮ್ಮಾ... ನಾನು ಬ್ಲಾಗನ್ನು ನಿಲ್ಲಿಸಿಲ್ಲ @Badarinath Palavalli.....ಬರೆದದ್ದನ್ನು ಅಲ್ಲಿ ಅಪ್ ಲೋಡ್ ಮಾಡಲು ಸ್ವಲ್ಪ ಸಮಯದ ಅಭಾವ... ಮತ್ತೆ ಗಡಿಬಿಡಿಯಲ್ಲಿ ಬರೆದು ಹಾಕಿದ್ರೆ ಶಾರದಾಂಬೆಯ ಸೇವೆಯಲ್ಲಿ ಚ್ಯುತಿ ಬಂದೀತೆಂಬ ಭಯದಿಂದ ಹಾಕಿರಲಿಲ್ಲ. ಹೊಸ ವರ್ಷಕ್ಕಾಗಿ ಕಾಯ್ತಾ ಇದ್ದೆ..ನೋಡು ಮರಳಿ ಬಂದಿದ್ದೀನಿ. ...ಹಹಹ..ನಿಮಗೆಲ್ಲಾ ತೋರಿಸ್ತೀನಿ..ಸರೀನಾ??...ನಿನ್ನ ಅಭಿಮಾನ ಕಂಡು ಹೃದಯಾಳದಿಂದ ಸದಾ ಸಂತೋಷವಾಗಿರು ಎಂದು ಹರಸ್ತಾ ಇದ್ದೀನಿ ತಮ್ಮಾ..

    ReplyDelete